Showing posts with label ನನ್ನ ಚಿಂತನೆಗಳು. Show all posts
Showing posts with label ನನ್ನ ಚಿಂತನೆಗಳು. Show all posts

Wednesday, June 10, 2015

ಫ್ರೊ. ಜಾನ್ ಫೋಬೆಸ್ ನ್ಯಾಶ್ ಗೇಮ್ ಥಿಯರಿ-

ನ್ಯಾಶ್ ದಾಂಪತ್ಯ ಮತ್ತು ಪ್ಯಾರಿಟೋ ಕುಟುಂಬ

ಇತ್ತೀಚೆಗೆ (ಮೇ ೨೩,೨೦೧೫ ರಂದು) ಅಮೆರಿಕದ ನ್ಯೂಜರ್ಸಿಯಲ್ಲಿ ಟ್ಯಾಕ್ಸಿ ಅಪಘಾತದಲ್ಲಿ (೮೭ನೇ ವಯಸ್ಸಿನಲ್ಲಿ )ನಿಧನರಾದ ಪ್ರೊಫೆಸರ್ ಜಾನ್ ಫೋಬೆಸ್ ನ್ಯಾಶ್  ಕಳೆದ ಶತಮಾನ ಕಂಡ ಅತ್ಯಂತ ಶ್ರೇಷ್ಠ ಗಣಿತಜ್ಞರ  ಸಾಲಿಗೆ ಸೇರಿದ್ದಾರೆ. ಪತ್ರಿಕಾ ಲೇಖನ (ಪ್ರ.ವಾ ೭,ಜೂನ್,೨೧೫) ಹೀಗೆ ಆರಂಭವಾಗುತ್ತದೆ: 
ನಮ್ಮ ಜೀವನ, ವೈಜ್ಞಾನಿಕ ಸಂಶೋಧನೆ, ಕೈಗಾರಿಕೆ, ವಾಣಿಜ್ಯ, ವ್ಯವಹಾರ ಎಲ್ಲ ಕ್ಷೇತ್ರಗಳಲ್ಲಿಯೂ ಅವರ ಗಣಿತ ಹಾಸುಹೊಕ್ಕಾಗಿದೆ ಎಂಬುದು ಅತಿಶಯವಲ್ಲ ಎನ್ನುತ್ತದೆ ಅವರ ಸಂಶೋಧನೆ.

ಯಾವುದೇ ಉದ್ದಿಮೆ ಲಾಭದಾಯಕವಾಗಿ ಮುಂದುವರೆಯಬೇಕಾದರೆ ಕಾರ್ಮಿಕರು ಪರಸ್ಪರ ಸಹಕರಿಸಿ ದುಡಿಯಬೇಕೇ ಅಥವಾ ಪೈಪೋಟಿಯಲ್ಲಿ ದುಡಿಯಬೇಕೇಸಹಕರಿಸಿದರೆ ಉತ್ತಮ ಎನಿಸಬಹುದು. ಆದರೆ, ಕಾರ್ಮಿಕರು ಪರಸ್ಪರ ಸ್ಪರ್ಧೆಯಲ್ಲಿ ಪ್ರತಿಯೊಬ್ಬರೂ ತಮ್ಮ ಪ್ರಗತಿಗಾಗಿ ದುಡಿದಾಗಲೂ ಉದ್ದಿಮೆ ಲಾಭಗಳಿಸುವುದರಲ್ಲಿ ಸಂದೇಹವಿಲ್ಲ. ಅಂದರೆ, ಅದರಿಂದ ಕಾರ್ಮಿಕರಿಗೂ ಹೆಸರು ಬರುತ್ತದೆ ಕಂಪೆನಿಗೂ ಲಾಭವಿದೆ. ಇದನ್ನು ಮೊಟ್ಟಮೊದಲಿಗೆ ಸಂಶೋಧನೆ ಮಾಡಿ ತೋರಿಸಿಕೊಟ್ಟವರು ಅರ್ಥಶಾಸ್ತ್ರದ ನೋಬ್ ಪ್ರಶಸ್ತಿ ವಿಜೀತರಾದ ಪ್ರೋಫೆಸರ್ ಜಾನ್ ನ್ಯಾಶ್.
ಮೇಲೆ ಹೇಳಿದಂತೆ, ಅವರ ಗೇಮ್ ಥೀಯರಿಯಲ್ಲಿ,
ಇದನ್ನು ನಮ್ಮ ಜೀವನಕ್ಕೆ ಅನ್ವಯಿಸಿ ಹೇಳುವುದಾದರೆ, ಗಂಡ ಹೆಂಡತಿ ಒಬ್ಬರಿಗೊಬ್ಬರು ಸ್ಪರ್ಧಾತ್ಮಕವಾಗಿ ಪ್ರೀತಿಸಿದರೆ ಅದು "ನ್ಯಾಶ ದಾಂಪತ್ಯ". 
ಅವಿಭಕ್ತ ಕುಟುಂಬದಲ್ಲಿ ಪರಸ್ಪರ ಸಹಕರಿಸಿದರೆ ಅದು "ಪ್ಯಾರಿಟೋ ಕುಟುಂಬ". 
( ನ್ಯಾಶ್ ಗೇಮ್ ಧಿಯರಿ ಚಿತ್ರ ನೋಡಿ. ಪತ್ರಿಕಾ ಲೇಖನದಲ್ಲಿದ್ದ ಬಾಕ್ಸ್ ಬರಹ ನೋಡಿ).

ಜಾನ್ ನ್ಯಾಶ್ ಅವರ ವೈಯಕ್ತಿ ಜೀವನದಲ್ಲಿ ಬಹಳಷ್ಟು ಕಾಲ ರೋಗಿಯಾಗಿಯೇ ಬಳಲಿ ನೊಂದವರು. ಅವರ ಬಗ್ಗೆ ಬ್ಯೂಟಿಫುಲ್ ಮೈಂಡ್ಎಂಬ ಚಲನ ಚಿತ್ರ (೨೦೦೧ರಲ್ಲಿ ಬಂದಿದೆ; ಆಸ್ಕರ್ ಪ್ರಶಸ್ತಿ ಪಡೆದಿದೆ) ನಿರ್ಮಿಸಲೂ ಅದೇ ಕಾರಣ.  ಮಾನಸಿಕ ಖಿನ್ನತೆ (ಡಿಪ್ರೆಶನ್) ಎಂಬುದನ್ನು "ಮನೋ ರೋಗ "(ಸ್ಕೀಜಿಫ್ರೀನಿಯಾ") ಎಂದೇ ವೈದ್ಯಕೀಯ ವಿಜ್ಞಾನ ಪರಿಗಣಿಸುವುದಿದೆ. ರೋಗಿ ಎಂದು ಷಾಕ್ ಟ್ರೀಟ್ ಮೆಂಟ್ ಕೊಡುವುದು, ವರ್ಷಗಟ್ಟಲೆ ಮಾತ್ರೆಗಳನ್ನು ಸೇವಿಸುವುದು ಇತ್ಯಾದಿಯಾಗಿ ಚಿಕಿತ್ಸೆ. ಆದರೆ, ಚಿಕಿತ್ಸೆ ಎಲ್ಲಿಯವರೆಗೆ ಯಾವಾಗ ನಿಲ್ಲಿಸಬೇಕು ಎಂಬುದನ್ನು ಖಚಿತವಾಗಿ ಹೇಳಲಾಗುವುದಿಲ್ಲ.  ಹಾಗೆನೋಡಿದರೆ, ಅದನ್ನು ಚಿಕಿತ್ಸೆಗೊಳಪಟ್ಟಾತನೇ/ಆಕೆಯೆ “ಈಗ ತಾನು ನಾರ್ಮಲ್ ಆಗಿದ್ದೇನೆ” ಎಂದು ನೀರ್ಧರಿಸಬೇಕಾಗುತ್ತದೆಂಬುದಕ್ಕೆ ಸಾಕಷ್ಟು ಉದಾಹರಣೆಗಳಿವೆ.
ಹೇಳಬೇಕೆಂದರೆ, ನಿಜಕ್ಕೂ ಮನಸ್ಸು ಮನೋಹರ- ಅತಿಸುಂದರಅದನ್ನು ಕೆಡಿಸಿಕೊಳ್ಳಬಾರದು.  ಮಾನಸಿಕ ಖಿನ್ನತೆ ಎಂಬುದು ರೋಗವೇ ಅಲ್ಲ. (Depression is not a desease, it is nothing but Delusion). ಕನಸು ಕಾಣಬೇಕು; ಭ್ರಮಾಧೀನರಾಗಿ ಬದುಕಬಾರದು. “ಮನೋರೊಗಕ್ಕೆ ಮದ್ದಿಲ್ಲಎನ್ನುವುದೂ ಆದೇ ಕಾರಣಕ್ಕಾಗಿ. ದಶಕಗಳೇ ನರಳಿದ ನ್ಯಾಶ್ ಹಲವು ಬಾರಿ ಆಸ್ಪತ್ರೆಗೆ ಸೇರಿದರೂ ಚಿಕಿತ್ಸೆ ಫಲಕಾರಿಯಾಗುವುದಿಲ್ಲ. ಕಡೆಗೂ ವಿಚ್ಛೇದನ ಬಯಸಿ ದೂರ ಹೋಗಿದ್ದ ಅವರ ಹೆಂಡತಿ ಅಲಿಯಾ ಮರಳಿ ಅವರನ್ನು ಸೇರಿಕೊಂಡದ್ದು ನ್ಯಾಶ್ ಅವರ ೫೦ ನೇ ವಯಸ್ಸಿನಲ್ಲಿ. ಆನಂತರ, ಆಕೆಯ ಪ್ರೀತಿ ವಿಶ್ವಾಸ, ಆರೈಕೆಯಿಂದ ನ್ಯಾಶ ಪೂರ್ಣ ಗುಣಮುಖರಾಗುತ್ತರೆ; ಯಾವುದೇ ಔಷಧಿ ಚಿಕಿತ್ಸೆಗಳಿಲ್ಲದೇ ಎಂಬುದು ಅತ್ಯಂತ ಗಮನಾರ್ಹವಾದದ್ದು.  

Thursday, December 04, 2014

ಕನ್ನಡ ಕಡ್ಡಾಯವಾಗಲೆಂದು, ನೆನೆಗುದಿಗೆ ಬಿದ್ದಿರುವ
೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ


Devnur Mahadeva
[My pencil Sketch]
ಕಕನ್ನಡ ನಾಡಿನಲ್ಲಿ ಕನ್ನಡ ಭಾಷೆಯ ಉಳಿವಿಗಾಗಿ, ಕುಡಿಯುವ ನೀರು, ಗಡಿವಿವಾದ, ಕಸವಿಲೇವಾರಿ ಮತ್ತು ಕನ್ನಡಿಗರಿಗೆ ಕನ್ನಡ ನೆಲದಲ್ಲಿ ಉದ್ಯೋಗಕ್ಕೆ ಆದ್ಯತೆ ಇತ್ಯಾದಿ ಸಮಸ್ಯೆಗಳ ಪರಿಹಾರಕ್ಕಾಗಿ ಕೈಗೊಂಡ ನಿರ್ಣಯಗಳು ಕೇವಲ ವೇದಿಕೆಯ ಮೇಲೆ ಮೊಳಗುವ ಕೊಂಬು ಕಹಳೆಗಳಾಗಿದ್ದು, ಅವ್ಯಾವುವೂ ಸರ್ಕಾರದ ಮಟ್ಟದಲ್ಲಿ ಜಾರಿಯಾಗದೇನೇ ಎಂದಿಗೂ ಬಗೆಹರಿಯದ ಜ್ವಲಂತ ಸಮಸ್ಯೆಗಳಾಗಿಯೇ ಉಳಿದಿವೆ. ಹೀಗಾಗಿ ಕನ್ನಡ ಸಾಹಿತ್ಯ ಸಮ್ಮೇಳನಗಳ ನಿರ್ಣಯಗಳೆಂದರೇನೆ ಅವು ಗಾಳಿಗೋಪುರಗಳಾಗಿ ಸಮ್ಮೇಳನಗಳು ಜಾತ್ರೆಗಳಾಗಿಬಿಡುವುದರಿಂದ, ಸಮ್ಮೇಳ ನಡೆಸುವುದೇ ನಿಷ್ಪ್ರಯೋಜಕವೆನಿಸಿದೆ.
ಇದೀಗ ವರ್ಷಂಪ್ರತಿಯಂತೆ ನಡೆಯಲಿರುವ ೮೧ ನೇ ಕನ್ನಡ ಸಾಹಿತ್ಯ ಸಮ್ಮೇಳನ ನೆನೆಗುದಿಗೆ ಬಿದ್ದಿದೆ. ಈ ಸಮ್ಮೇಳನಕ್ಕೆ ದಲಿತ ಸಾಹಿತಿಯೊಬ್ಬರು ಅಧ್ಯಕ್ಷರಾಗಬೇಕೆಂದು ಸಾಹಿತಿ ದೇವನೂರು ಮಹಾದೇವ ಅವರನ್ನು ಆಹ್ವಾನಿಸಿದ್ದಾರೆ. ದೇವನೂರರು ತಾವೊಬ್ಬ ದಲಿತ ಸಾಹಿತಿಯಾಗಿ ಗುರುತಿಸಿಕೊಳ್ಳುವುದಕ್ಕಿಂತ ಮೊದಲು ಒಬ್ಬ ಸಾಮಾನ್ಯ ದಲಿತ ವ್ಯಕ್ತಿಯಾಗಿ ಪ್ರತಿಕ್ರಿಯಿಸಿದ್ದಾರೆ. ದಲಿತರ ಮುಗ್ಧತೆ, ಅನಕ್ಷರತೆಯನ್ನು ಹತ್ತಿರದಿಂದ ಕಂಡವರಾಗಿದ್ದು,  ಅವರ ಮುಖ್ಯ ಬೇಡಿಕೆಯೇ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು. ಅವರ ಈ ಹೇಳಿಕೆ ನಿಜಕ್ಕೂ ಕನ್ನಡಿಗರನ್ನು ಜಾಗೃತಗೊಳಿಸುವಂತಿದೆ.

ದಲಿತರಿಗೆ ಮಾತ್ರವಲ್ಲ ಕರ್ನಾಟಕದ ೬ ಕೋಟಿ ಕನ್ನಡಿಗರೂ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಕನ್ನಡವನ್ನು ಪ್ರಾಥಮಿಕ ಶಾಲೆಗಳಲ್ಲಿ ಕಡ್ಡಾಯವಾಗಲೇ ಬೆಕೆಂಬುದನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಈಗಾಗಲೇ, ನರ್ಸರಿಯಿಂದ ಇಂಗ್ಲೀಷ್ ಕಲಿತರೇನೆ ಮಕ್ಕಳು ಬುದ್ಧಿವಂತರಾಗಿ ಉತ್ತಮ ಸಂಬಳದ ಉದ್ಯೋಗ ಪಡೆಯುತ್ತಾರೆಂಬ ತಪ್ಪು ಕಲ್ಪನೆಯೇ ನಿಜಕ್ಕೂ ಹೆತ್ತವರಿಗೆ ಅವರ ಮುಪ್ಪಿನ ಕಾಲದಲ್ಲಿ  ತಲೆನೋವಾಗಿ ಪರಿಣಮಿಸಿತ್ತಿರುವುದನ್ನು ಕಾಣುತ್ತಿದ್ದೇವೆ. ಯಾಕೆಂದರೆ, ಕನ್ನಡದಲ್ಲಿ ಓದಲು ಬಾರದ ಸಾವಿರಗಳಿಂದ ಲಕ್ಷಗಟ್ಟಲೆ ಸಂಪಾದಿಸುವ ಸಾಫ್ಟ್ ವೇರ್ ಮತ್ತು ಇತರೆ ಉನ್ನತ ಉದ್ಯೋಗಿಗಳ ಯುವಪೀಳಿಗೆ ಬಹಳಷ್ಟು ಬೆಳೆಯುತ್ತಿದೆ. ಅವರು ಮಾತೃಭಾಷೆ ಕನ್ನಡದಿಂದ ಮತ್ತು ನಮ್ಮ ಸಂಸ್ಕೃತಿ ಪರಂಪರೆಯಿಂದ ದೂರವಾಗುದಲ್ಲದೇ ತಮ್ಮ ಹೆತ್ತವರ ಮನೆ ಮನಸ್ಸುಗಳಿಂದಲೇ ದೂರವಾಗುತ್ತಿದ್ದಾರೆ. ವಿದೇಶಕ್ಕೆ ಹೋಗಿ ನೆಲೆಸುತ್ತಿದ್ದಾರೆ. ಅಂತಹ ಹೆತ್ತವರು ತಮ್ಮ ಮಕ್ಕಳ ಚಿತ್ರ ವಿಚಿತ್ರ ಲೈಫ್ ಸ್ಟೈಲ್ ಗಳನ್ನು ಬದಲಿಸಲಾಗದೇನೆ ದೂರದಿಂದಲೇ ನೋಡುತ್ತ ನೋವೂ ನುಂಗಿಕೊಂಡು ಬದುಕಲಾರದೇನೆ ಬದುಕುತ್ತ ಒಂಟಿತನ ಅನುಭವಿಸುತ್ತಾರೆ. ತಾವು ಮಕ್ಕಳನ್ನು ಚಿಕ್ಕದಿಂನಿಂದ ನಮ್ಮ ಕಣ್ಣೆದುರಿನಲ್ಲೆ ಇಟ್ಟುಕೊಂಡು ಕನ್ನಡ ಕಲಿಸದೇನೆ ದೊಡ್ಡ ತಪ್ಪು ಮಾಡಿದೆವು ಎಂದೇ ಪರಿತಪಿಸುವವರನ್ನು ನೋಡಿದ್ದೇನೆ. ನೆಲೆಸುತ್ತಿದ್ದಾರೆ [ ಇದಕ್ಕೆ ಹೊರತಾಗಿ ಕೆಲ ಯುವ ಮಕ್ಕಳ ಉದಾಹರಣೆಗಳಿರಬಹುದು].

ಕರ್ನಾಟಕ ಸರ್ಕಾರ ನಮ್ಮ ನೆರೆಯ ರಾಜ್ಯಗಳಾದ ತಮಿಳು ನಾಡು ಮತ್ತು ಮಹಾರಾಷ್ಟ್ರ ಇವುಗಳನ್ನು ನೋಡಿಯೂ ಅವರ ಮಾತೃಭಾಷೆಯ ಅಭಿಮಾನ ಕಂಡೂ ನಮ್ಮ ನಾಡಿನಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿಕೊಂಡು ಕನ್ನಡಿಗರು ಅಭಿಮಾನಶೂನ್ಯರಲ್ಲವೆಂಬುದನ್ನು ತೋರಿಸಬೇಕಾಗಿದೆ. ಅಂತಹ ಕನ್ನಡಪರ ಕಾಳಜಿ ನಮ್ಮ ಗಣ್ಯಸಾಹಿತಿಗಳಲ್ಲೂ ಇದ್ದಂತಿಲ್ಲ. ಕನ್ನಡಪರ ಸಂಘಟನೆಗಳಲ್ಲೂ ಬಲವಾದ ಹೋರಾಟವಿಲ್ಲ. ಸಾಹಿತಿಗಳಲ್ಲೇ ಗುಂಪುಗಾರಿಕೆ ತಮ್ಮ ಸ್ವಾರ್ಥಕ್ಕಾಗಿ ಲಾಬಿಗಳು, ಅದು ಸಾಹಿತ್ಯಸಮ್ಮೇಳನ ಗೋಷ್ಟಿಗಳಿಗೆ ಹಾಗೂ ಸನ್ಮಾನಗಳಿಗೆ ನಡೆಯುತ್ತವೆ. ಕನ್ನಡಪರ ನಿರ್ಣಯಗಳು ನಾಟಕೀಯವಾಗಿ ಕೊನೆಗೊಳ್ಳುತ್ತವೆಯಷ್ಟೇ. ಕೆಲ ಪ್ರಾಮಾಣಿಕ ಸಾಹಿತಿಗಳೂ ಈ ಸಮ್ಮೇಳನದ ಸಂತೆ -ಜಾತ್ರೆಯಿಂದ ದೂರವೇ ಉಳಿಯುತ್ತಾರೆ. ಇದೀಗ ಕನ್ನಡಿಗರೂ ಎಚ್ಚೆತ್ತುಕೊಳ್ಳುತ್ತಿದ್ದಾರೆ.

ದೇವನೂರು ಮಹಾದೇವ ಅವರ ಮುಖ್ಯ ಬೇಡಿಕೆಯಾದ ೧ ರಿಂದ ೧೦ ನೇ ತರಗತಿವರೆಗೆ ಕನ್ನಡ ಕಡ್ಡಾಯವಾಗಬೇಕೆಂಬುದು ಸ್ವಾಗತಾರ್ಹವೇ. ತಮ್ಮ ಬೇಡಿಕೆ ಈಡೇರುವಂತಿದ್ದರೆ ತಾವು ಸಮ್ಮೇಳನಾಧ್ಯಕ್ಷ ಪೀಠ ಅಲಂಕರಿಸುವೆನೆಂಬ ಅವರ ಅಭಿಪ್ರಾಯ ನಿಜಕ್ಕೂ ಶ್ಲಾಘನೀಯವೇ ಆಗಿದೆ.
ದೇವನೂರು ಸಮ್ಮೇಳನಾಧ್ಯಕ್ಷರ ರಾಜಬೀದಿ ಮೆರವಣಿಗೆಯ ಉತ್ಸವ ಹಾಗೂ ಅವರಿಗೆ ದೊರಕುವ ರಾಜೋಪಚಾರದ ಆತಿಥ್ಯ ಜೊತೆಗೆ ಗೌರವ ಸಂಭಾವನೆಯಾಗಿ ಸಿಗುವ ೧೨ ಲಕ್ಷಕ್ಕೂ ಹೆಚ್ಚಿನ ಸಂಭಾವನೆಯನ್ನು ನಿರಾಕರಿಸುವಂತಹ ಹೇಳಿಕೆಯನ್ನು ನೀಡಿ ತಾವು ನಿಜಕ್ಕೂ ಮಹಾದೇವರೇ  ಆಗಿದ್ದಾರೆ. ಅವರು ತಮ್ಮ ಗೌರವಕ್ಕೆ ಚ್ಯುತಿ ಬರುವಂತೆ ತಮ್ಮ ನಿಲುವನ್ನು ಖಂಡಿತ ಬದಲಿಸಬಾರದು.
ಕೊನೆಯ ಮಾತು: ಹೀಗೆ ಹೇಳುವ ನಾನು ಇಳಿವಯಸ್ಸಿನಲ್ಲದ್ದೇನೆ. ನಮ್ಮ ಮಕ್ಕಳಿಗೆ ಕನ್ನಡ ಬರುವುದಿಲ್ಲವೆಂದು ಕೊರಗುವ ಸ್ನೇಹಿತರನ್ನೂ ನೋಡಿ ಮರುಗಿದ್ದೇನೆ 
ನನ್ನ ಗಂಡು ಮಕ್ಕಳಿಗೆ ಪ್ರಾಥಮಿಕ ಶಾಲೆಯಲ್ಲಿ ಕನ್ನಡವನ್ನು ಸ್ವ ಇಚ್ಛೆಯಿಂದಲೆ ಕಡ್ಡಾಯವಾಗಿ ಕಲಿಸಿದ್ದೇನೆ. ಇದೀಗ ಸಾಫ್ಟ್ ವೇರಿಗಳೇ ಆಗಿದ್ದಾರೆ. ಪರದೇಶದ ಇಂಗ್ಲೀಷನ್ನು ಅಸ್ಖಲಿತವಾಗಿ ಮಾತನಾಡಲು ಬರೆಯಲು ಕಲಿತವಾರಾಗಿ ಅದನ್ನು ಅವರ ಕಂಪೆನಿ ಕಂಪೆನಿ ಉದ್ಯೋಗಕ್ಕಷ್ಟೇ ಸೀಮಿತಗೊಳಿಸಿದ್ದಾರೆ. ಕನ್ನಡದಲ್ಲಿ ಮಾತನಾಡುತ್ತಾರೆ. ಕನ್ನಡ ವನ್ನು ಚೆನ್ನಾಗಿಯೇ ಓದಲು ಬರೆಯಲೂ ಬಲ್ಲವರಾಗಿದ್ದಾರೆ ]

Wednesday, June 25, 2014

ಪ್ರೀತಿ-ಪ್ರೇಮಗಳ ನಡುವೆ ಹೆಣ್ಣು

ಬ್ರಹ್ಮ ಹೆಣ್ಣನ್ನು ಸೃಷ್ಟಿಸುವಾಗ ಏನೆಲ್ಲ ಸೇರಿಸಿದ್ದಾನೋ ಅವನೇ ಬಲ್ಲ... ಪ್ರೀತಿ-ಪ್ರೇಮಗಳ ನಡುವೆ ಗಂಡನ್ನು ಆಟವಾಡಿಸುತ್ತಾಳೆ. ಹಿಂದೆಂದೋ ಪ್ರೇಯಸಿಯಾದವಳು ತಂಗಿಯಾಗಿಬಿಡುತ್ತಾಳೆ. ತಂಗಿ ಎಂದುಕೊಂಡರೆ ಪ್ರೇಯಸಿಯಾಗಿರುತ್ತಾಳೆ. ನಿಜವಾಗಿಯೂ ಈ ತ್ರಿಗುಣಾತ್ಮಕ(ಸತ್, ರಜೋ ಮತ್ತು ತಮೋಗುಣಗಳ) ಪ್ರಪಂಚದಲ್ಲಿ ಗೆಲ್ಲುವುದು ಪ್ರೀತಿಯೇ. ಪ್ರೇಮ ಇದ್ದೂ ಬೂದಿ ಮುಚ್ಚಿದ ಕೆಂಡದಂತಿರುತ್ತದೆ.
ತಾಯಿ ಪ್ರೇಮಕ್ಕಿಂತ‌ ಹೆಂಡತಿ ಪ್ರೀತಿಯೇ ಮಿಗಿಲೆನಿಸುವುದು ಹೀಗೆಯೇ. ಹೆಣ್ಣಿಗೆ ತಂದೆಯ ಪ್ರೇಮಕ್ಕಿಂತ ಗಂಡನ ಪ್ರೀತಿಯೇ ಮಹತ್ವವಾಗುವುದೂ ಅವನೇ ಪತಿದೇವನಾಗುವುದೂ ಹೀಗೆಯೇ. ಆದರೆ, ಗಂಡಿಗೆ ಹೆಂಡತಿ ದೇವತೆಯಾಗಿ ಕಾಣುವುದು ಅಪರೂಪವೇ...

Saturday, June 21, 2014

ಅಳಿದ ಮೇಲೆ..

ವಿಶಾಲ ವಿಶ್ವದಲ್ಲಿ ಮನುಷ್ಯ ಒಂದು ಸಣ್ಣ ಪ್ರಾಣಿ. ಅವನು ತನ್ನ ಸಣ್ಣತನಗಳಿಂದ ಸಣ್ಣವನಾಗುತ್ತಾನೆ; ಸಣ್ಣವನಾಗೇ ಉಳಿಯುತ್ತಾನೆ, ಹೇಳ ಹೆಸರಿಲ್ಲದೇ ಅಳಿಯುತ್ತಾನೆ. ವಿಶ್ವದ ಎಲ್ಲೆ ಮೀರಿ ಚಿಂತಿಸುವ ಮತ್ತು ವಿವೇಚಿಸುವ ಶಕ್ತಿಯನ್ನು ಪಡೆದುಕೊಂಡು, ಕಷ್ಟಸಹಿಷ್ಟುತೆಯಲ್ಲಿ ದುಡಿದು ತನ್ನ ದೊಡ್ಡತನದಿಂದ ಬೆಳೆಯುತ್ತಾನೆ. ಇತರರನ್ನೂ ಬೆಳೆಯುವಂತೆ ಮಾಡುತ್ತಾನೆ. ಅಳಿದಮೇಲೂ ಸ್ಮರಣೆಯಲ್ಲಿ ಇರುತ್ತಾನೆ.

Wednesday, June 18, 2014

ಬದುಕೆಂದರೆ ಒಂದು ನಿರಂತರ ಹೋರಾಟ

ಬದುಕು ಒಂದು ರಣಾಂಗಣ. ಇಲ್ಲಿ ಮನುಷ್ಯನಿಗೆ ಹೋರಾಟ ಹುಟ್ಟುಗುಣವಾಗಿರುತ್ತದೆ. ಬರೀ ಸುಖಾಪೇಕ್ಷೆ ಸ್ವಭಾವ ಜನ್ಯವಾದರೆ, ಕಷ್ಟ ಸಹಿಷ್ಣುತೆ ಅಭ್ಯಾಸವಾಗದಿದ್ದರೆ, ಸಾಹಸ ಪ್ರವೃತ್ತಿಯೇ ಇಲ್ಲವಾದರೆ, ಅವನ ಹುಟ್ಟುಗುಣಕ್ಕೇ ತಕ್ಕು ಹಿಡಿದಂತೆಯೆ. ಯಾಕೆಂದರೆ, ಮಗು ಹುಟ್ಟಿದ ಕೂಡಲೇ ಮೊದಲ ಉಸಿರೆಳೆದುಕೊಳ್ಳುತ್ತಾ ಬದುಕುವುದಕ್ಕೆ ಹೋರಾಟ ಆರಂಭಿಸುತ್ತದೆ, ಅದೇ ಹೋರಾಟದ ಮೂಲ ಸಹಜ ಗುಣ ಮನುಷ್ಯನಿಗೆ ಜೀವಮಾನದುದ್ದಕ್ಕೂ ಇರುತ್ತದೆ; ಇರಬೇಕಾಗುತ್ತದೆ.

Monday, June 16, 2014

ಲೋಕವೆಂಬುದು ಜನರ ದೃಷ್ಟಿಯಲ್ಲಿ...

ಲೋಕ  ಅನೇಕರ ದೃಷ್ಟಿಯಲ್ಲಿ ಒಂದು ವ್ಯವಹಾರಿಕವ್ಯವಸ್ಥೆ. ಕೆಲವರಪಾಲಿಗೆ ಬರಿ ಅದೃಷ್ಟದ ಅವಸ್ಥೆ. ಹಲವರಿಗೆ ಒಂದು ಪ್ರಾಯೋಗಿಕ ಭೂಮಿಕೆ. ಮತ್ತೆ ಕೆಲವರಿಗೆ ಹಿರಿಯರ ಅನುಭವದಲ್ಲಿ  ಮತ್ತು ದೈವಿಕತೆಯಲ್ಲಿ ಅಮೃತತ್ವವಿದೆ ಎಂಬ ನಂಬಿಕೆ.

ವ್ಯವಹಾರಿಕವೆಂದುಕೊಂಡರೆ ನಿರ್ಭಾವುಕರು, ಹಣವೇ ಎಲ್ಲ ಎಂದು ತಿಳಿದವರು.
ಬರೀ ಅದೃಷ್ಟವೆಂದು ಕುಳಿತವರು ದುರ್ಬಲರು.
ಪ್ರಾಯೋಗಿಕ ಭೂಮಿಕೆ  ಎಂದು ತಿಳಿದವರಿಗೆ ನಿರಂತರ ಹೋರಾಟದ ಛಲ. ಸಿದ್ಧಿಗಿಂತಲೂ ಸಾಧಕರಾಗಿರುವುದರಲ್ಲೇ ತೃಪ್ತಿ. ಯಾಕೆಂದರೆ, ಪ್ರಯತ್ನ ನಮ್ಮದು ಸಂಕಲ್ಪ ಸಿದ್ಧಿ ಪರಮಾತ್ಮನ ಇಚ್ಛೆಯಷ್ಟೇ.. ಇಂಥವರು ದೇವರ ಬಗ್ಗೆ ಹೀಗಿರುತ್ತಾರೆ-
ದೇವರನ್ನು ನಂಬಿದವ ಸುಖಿ. ದೇವರನ್ನೇ ಅವಲಂಬಿಸಿದವ ಅಸುಖಿ. ದೇವರಿಲ್ಲ ಎನ್ನುವವನು ಸುಖದ ಹುಡುಕಾಟದಲ್ಲೇ ಇರುತ್ತಾನೆ.
ಅಂತೆಯೇ, ದೈವಿಕತೆ ಬಲ್ಲ ಇವರಿಗೆ ಸುಖವೆಂಬುದು ಕಾಲಬುಡದಲ್ಲೇ ಇದೆ ಎಂಬ ಅರಿವು ಇರುತ್ತದೆ. ಅಂದಹಾಗೆ, ಮಾತು ಬಾಯಿಂದ ಜಾರಿಹೋಗುವ ಮುನ್ನ ಹತ್ತು ಸಲ ಯೋಚಿಸಬೇಕು. ಬರಹ ಕೈಯಿಂದ ಇತರರಿಗೆ ತಲುಪುವ ಮನ್ನ ಹತ್ತು ಹಲವು ದೃಷ್ಟಿ ಕೋನದಲ್ಲಿ ನೋಡಿರಬೇಕು. ನಿಮ್ಮ ಹಣ, ವಸ್ತು(ದೇಹ ಕೂಡ), ವನ್ನು ಬಳಸಿಕೊಳ್ಳುವ ಮುನ್ನ ಮುಂದಾಲೋಚನೆ ಇರಬೇಕು, ಸಾಲ ಪಡೆಯುವ ಮುನ್ನ ಕೊಡುವ ಮುನ್ನ ಎಚ್ಚರದಿಂದಿರಬೇಕು.
-ಶಿವ ಚೇತನ
”ಶಿವ ಚೇತನ ’’ಎಂದರೆ ಯಾರು? ಎಂದು ಕೇಳದಿರಿ. ಅದು ನನ್ನ ಜೀವಾತ್ಮನ ಧ್ವನಿ!  ಶಿರೋನಾಮೆ.