ಫೋಟೋಗಳು: ಎಸ್.ರಂಗನಾಥ್

ಎತ್ತನೋಡಿದರತ್ತ ಹರಡಿಕೊಂಡಿರುವ ಬಂಡೆಗಳ ಗಿರಿ ಕಂದರಗಳ ನಡುವೆ ಅನೇಕ ಕವಲು ಕವಲುಗಳಾಗಿ ಕಾವೇರಿ ಧುಮ್ಮಿಕ್ಕುವ ಸೋಬಗಿನ ನೋಟಕ್ಕೆ ಎರಡು ಕಣ್ಣುಗಳು ಸಾಲದಾಗುತ್ತದೆ.


ಒಂದು ಅಂದಾಜಿನ ಪ್ರಕಾರ ಚಿಕ್ಕ ಜಲಧಾರೆಗಳು 100, ದೊಡ್ಡವು 30 ಕ್ಕೂ ಹೆಚ್ಚು. ತಮಿಳು ನಾಡಿನ ತೂಗು ಸೇತುವೆಯೊ ಇಲ್ಲಿ ನೋಡಲು ಆಕರ್ಷಣೀಯವೇ.

ಧುಮ್ಮಿಕ್ಕುವಾಗ ಏಳುವ ಪನ್ನೀರಿನಂಥ ಹೊಗೆ ಹೊಗೆ! ಜಲಧಾರೆಯ ಗುಂಪು ಗುಂಪುಗಳನ್ನು ಆಯ್ದುಕೊಳ್ಳಲು ವಿಹಾರಾರ್ಥಿಗಳು ಹೊರಡುತ್ತಾರೆ.
ಹಾಗೆ ಆಯ್ದುಕೊಂಡು ಇಲ್ಲಿ ಜಲಕ್ರೀಡೆಯಾಡುವುದೇ ಒಂದು ಮೋಜು...

ಇಲ್ಲಿ ಲೆಕ್ಕವಿಡಲಾಗದಷ್ಟು ಪ್ರಪಾತಗಳ ಜಲಲ ಜಲಲ ಜಲಧಾರೆಗಳು!
ಈ ತೆಪ್ಪದೊಳಗೂ ಕೂತು ಬಂಡೆಗಳ ಗಿರಿ ಕಂದರಗಳ ನಡುವೆ ಹರಿವ ಹೊಳೆಯಲಿ ದೋಣಿ ವಿಹಾರವೂ ಮನಕೆ ಇನ್ನಷ್ಟು ಮುದವನ್ನೇ ನೀಡುತ್ತದೆ.
ಹರಿವ ತೊರೆಯ ಹಾಲ್ನೊರೆಗಳ ಬುಗ್ಗೆ ಬುಗ್ಗೆಯಲ್ಲಿ.. ಹೀಗೆ ಕಳೆದು ಹೋಗುವ ರಸನಿಮಿಷಗಳ ಒಮ್ಮೆಯಾದರೂ ಅನುಭವಿಸಿಯೆ ತೀರಬೇಕು.
ಹರೆಯದ ಮೈಮನಗಳು ಪುಳಕಗೊಂಡಾಗ ಜೀವನೋತ್ಸಾಹವೇ ಚಿಮ್ಮುವುದು.
ವೃದ್ಧರಿಗೊ ಹೊಸ ಹರೆಯವೇ ತುಂಬಿ ಬಂದಂತಾಗುವುದು.
ಮೈಸೂರಿನಿಂದ ಹೊಗೆನಕಲ್ ಗೆ ಮಲೆ ಮಹದೇಶ್ವರ ಬೆಟ್ಟ-ಗೋಪಿನಾಥಮ್ ಹೀಗೆ 200 ಕಿ.ಮೀ. ದೂರವಾದರೆ ಬೆಂಗಳೂರಿನಿಂದ 180 ಕಿ.ಮೀ. ಇದೆ.
No comments:
Post a Comment