Sunday, January 16, 2011

ತೀರ್ಥ ರಾಮೇಶ್ವರ ದೇವಸ್ಥಾನ

ತೀರ್ಥ ರಾಮೇಶ್ವರ ದೇವಸ್ಥಾನ,  ದಾವಣಗೆರೆ ಜಿಲ್ಲೆಯ ಹೊನ್ನಾಳ್ಳಿ ತಾಲ್ಲೂಕು ಬೆಳಗುತ್ತಿಯಲ್ಲಿರುವ ತೀರ್ಥರಾಮೇಶ್ವರ ದೇವಸ್ಥಾನ. ಇಲ್ಲಿರುವ ಪುಣ್ಯ ತೀರ್ಥ ಸದಾ ತುಂಬಿರುತ್ತದೆ. ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಈ ದೇವಸ್ಥಾನವು ಬೆಳಗುತ್ತಿಗೆ ಎರಡು ಕಿ.ಮೀ.ದೂರದ ಬೆಟ್ಟದ ಮೇಲಿದೆ. ಬಯಲು ಸೀಮೆಯ ಸುಂದರ ಪ್ರೇಕ್ಷಣೀಯ ಸ್ಥಳ.  
ತೀರ್ಥರಾಮೇಶ್ವರ ದೇವಾಲಯ ಮುನ್ನೋಟ
ನಮ್ಮ ತಂದೆ ಮತ್ತು ನಮ್ಮ ಪೂರ್ವಜರು ವಾಸಿಸುತ್ತಿದ್ದ ಸ್ಥಳವಿದು. ನನ್ನ ತಂದೆ-ತಾಯಿಯವರು ಅವರಿಗೆ ಒಂದು ಹೆಣ್ಣು ಮಗುವಿನ ನಂತರ, ಮಕ್ಕಳು ಹುಟ್ಟಿ ಸಾಯುತ್ತಿದ್ದ ಸಂದರ್ಭದಲ್ಲಿ ಈ ತೀರ್ಥರಾಮೇಶ್ವರನಿಗೆ ಹರಕೆ ಹೊತ್ತುದರ ಪುಣ್ಯಫಲದಿಂದಲೇ ನಾನು ಹುಟ್ಟಿದ್ದು. ಹರಕೆ ಹನ್ನೆರಡು ವರ್ಷವೆನ್ನುತ್ತಾರೆ. ಅಂತೇ ನಾನು ಹುಟ್ಟಿದ ಹನ್ನೆರಡು ವರ್ಷಗಳನಂತರ ನನ್ನನ್ನು ಕರೆದೊಕೊಂಡು ಹೋಗಿ ಈ ದೇಗುಲಕ್ಕೆ ಗಂಟೆ ಕಟ್ಟಿದ ಹರಕೆ ತೀರಿಸಿದ್ದು ನನಗೆ ಇನ್ನೂ ನೆನಪಿನಲ್ಲಿದೆ.  ನಾವು ವಿಷ್ಣು ಭಕ್ತರು, ಶಿವನನ್ನೂ ರಾಮನನ್ನೂ ಒಂದಾಗಿಸಿ ನನ್ನ ಹೆಸರು "ಶಿವರಾಮ" ಎಂದಿಟ್ಟರಂತೆ. ನಾನು ಇತ್ತೀಚೆಗೆ ನನ್ನ ಕುಟುಂಬದೊಂದಿಗೆ ಭೇಟಿಕೊಟ್ಟಾಗ ನಾನು ತೆಗೆದ ಫೋಟೋಗಳಿವು-
ದಕ್ಷಿಣ ಕಾಶಿ ಎಂದೇ ಹೆಸರಾದ ಈ ತೀರ್ಥರಾಮೇಶ್ವರನ ದೇವಾಲಯದ ಮಂಭಾಗದಲ್ಲಿ ಇರುವ ಈ ಪುಣ್ಯತೀರ್ಥದ ವೈಶಿಷ್ಟ್ಯವೆಂದರೆ, ಈ ತೀರ್ಪುದ ಕೊಳ ತುಂಬುತ್ತಿದ್ದಂತೆಯೇ  ಬೆಟ್ಟದಿಂದ ಜಳುಜುಳು ಹರಿದು ಬರುತ್ತಿರುವ ನೀರು ನಿಲ್ಲತ್ತದೆ.
ಇಲ್ಲಿ ಯಾತ್ರಾರ್ಥಿಗಳು ತಲೆಯಮಲೇ ನೀರು ಹಾಕಿಸಿಕೊಂಡು ದೇಗುಲದ ಪಕ್ಕದಲ್ಲಿ ಹೋಗಿ ಸ್ನಾನ ಮಾಡುತ್ತಾರೆ. ನೀವೂ ಒಮ್ಮೆ ಹೋಗಿ ಬನ್ನಿ, ಇಲ್ಲಿ ಸ್ನಾನ ಮಾಡಿದರೆ ಗಂಗಾನದಿಯಲ್ಲಿ ಸ್ನಾನ ಮಾಡಿದ ಪುಣ್ಯ ಲಭಿಸುತ್ತದೆ ಎಂಬ ಪ್ರತೀತಿಯಿದೆ.
ತೀರ್ಥರಾಮೇಶ್ವರ ಪುಣ್ಯತೀರ್ಥ
ತೀರ್ಥರಾಮೇಶ್ವರ ಸ್ವಾಮಿ.
ಈ  ಸ್ಥಳ ಮಹಾತ್ಮೆಯೂ ಅಷ್ಟೇ ಸುಪ್ರಸಿದ್ಧವಾಗಿದೆ. ಶಿವಮೊಗ್ಗಾದಿಂದ 35 ಕಿ.ಮೀ.ದೂರದಲ್ಲಿದೆ. ಬಸ್ ಸೌಕರ್ಯವಿದೆ. ಅಥವಾ ನಿಮ್ಮ ವಾಹನದಲ್ಲಿ ಹೋಗಿ ಬನ್ನಿ

ತೀರ್ಥರಾಮೇಶ್ವರ ಪುಣ್ಯ ತೀರ್ಥ

ಈಶ್ವರ ಮಂಟಪ

No comments: