Thursday, June 09, 2011

ಹಿಂದೂಗಳ ಪರ ಮಾತನಾಡುವವರೆಲ್ಲ ಕೋಮುವಾದಿಗಳೇ....

ಭಾರತದಲ್ಲಿ ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೋ ಇಲ್ಲಾ ಮುಸ್ಲಿಮರೋ ಅಥವಾ ಕ್ರಿಶ್ಚಿಯನ್ ರೋ ಎಂಬ ಪ್ರಶ್ನೆಗೆ ಪ್ರೈಮರಿ ಶಾಲೆಯಲ್ಲಿ ಓದುವ ಒಂದು ಮಗುವೂ ಕೂಡ, ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಉತ್ತರ ನೀಡುತ್ತದೆ.  ಆದರೇನು! ಇಲ್ಲಿ ನಾನೇ  ಆಗಲಿ ಯಾರೇ ಆಗಲಿ ಹಿಂದೂಗಳ ಪರ ಮಾತನಾಡಿದರೆ ಅವನು ಕೋಮುವಾದಿ ಎಂದು ಗ್ರಹಿಸಲಾಗುತ್ತದೆ.  ಅದೇ ಮುಸ್ಲಿಮರೋ ಕ್ರಿಶ್ಚಿಯನ್ ರೋ ಅವರ ಕೋಮಿನ ಬಗ್ಗೆ ಮಾತನಾಡಿದರೆ ಯಾರೂ ಅವರನ್ನು ಕೋಮುವಾದಿ ಎಂದು ಹೇಳುವುದಿಲ್ಲ. ನಮ್ಮ ದೇಶದಲ್ಲಿ  ಅಲ್ಪ ಸಂಖ್ಯಾತರಿಗೆ ಇರುವಷ್ಟು ಪ್ರಾತಿನಿಧ್ಯ ಅವರವರ ಮೂಲ ದೇಶಗಳಲ್ಲಿಯೂ ಇರಲಿಕ್ಕಿಲ್ಲ... ಅಲ್ಪಸಂಖ್ಯಾತರಿಗೆ ಪ್ರತ್ಯೇಕ ರಕ್ಷಣೆ ಸ್ಥಾನ ಮಾನಗಳು ಎಲ್ಲ ಸ್ತರಗಳಲ್ಲೂ ಕಂಡು ಬರುತ್ತವೆ. ಹಾಗೆ ಪೋಷಿಸಿಕೊಂಡು ಬರುವುದೇ ಕಾಂಗ್ರೇಸ್ ಆದಿಯಾಗಿ ಕೆಲ ಪ್ರಮುಖ ಪಕ್ಷಗಳ ಧೋರಣೆಯಾಗಿದೆ. ಹಾಗೆಂದು ಬಿಜೆಪಿ ಏನೂ ಮುಸ್ಲಿಂ ಯಾ ಕ್ರಶ್ಚಿಯನ್ ನ ವಿರೋಧಿಯೇನಲ್ಲವೆಂಬುದೂ ವಾಜಪೇಯಿ ಪ್ರಾಧಾನಿಯಾದಾಗ ಋಜುವಾತಾಗಿದೆಯಲ್ಲವೇ....

ಬಿಜೆಪಿಯಲ್ಲೂ ಮುಸ್ಲಿ ಕ್ರಿಶ್ಚಿಯನ್ ರಾಜಕೀಯ ಧುರೀಣರಿದ್ದಾರೆ; ಅಲ್ಲವೇ? ಇನ್ನು ಸಾಹಿತ್ಯ ಕಲೆ ವಿಚಾರಗಳಿಗೆ ಬಂದರೆ ಅಲ್ಪ ಸಂಖ್ಯಾತರಲ್ಲಿ ಯಾರೇ ಆಗಲಿ ನಮ್ಮ ದೇಶದ  ಹಿಂದಿ, ಮರಾಠಿ, ಕನ್ನಡ, ತೆಲುಗು ಹೀಗೊಂದು ಪ್ರಾಂತೀಯ ಭಾಷೆಯೊಂದರಲ್ಲಿ ಸಾಹಿತ್ಯ ರಚನೆ ಮಾಡಿ ಅಲ್ಪ ಸ್ವಲ್ಲ ಸಾಧನೆ ಮಾಡಿದರೆ ಸಾಕು, ನಮ್ಮ ಪತ್ರಿಕೆಗಳು ಮೀಡಿಯಾಗಳು ಅವರನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸಿಬಿಡುತ್ತವೆ; ಅವರಿಗೆ ಪ್ರಶಸ್ತಿ ಪುರಸ್ತಾರಗಳನ್ನೂ ಅತಿ ಶೀಘ್ರದಲ್ಲೇ ಬರುವಂತೆ ಪ್ರಚಾರ ಮಾಡಿಬಿಡುತ್ತವೆ. ಜೊತೆಗೆ ಅಲ್ಪಸಂಖ್ಯಾತರಿಗೆಂದೇ ಮೀಸಲಾದ ಅಂತಹ ಸ್ಥಾನ ಮಾನಗಳೂ ಅವರಿಗೆ ಸಲ್ಲುವಂತಾಗವುದು ಎಲ್ಲರಿಗೂ ತಿಳಿದ ವಿಚಾರವೇ.  ಆನಂತರ ಆ ಅಲ್ಪಸಂಖ್ಯಾತ  ಆ ಪ್ರೋತ್ಸಾಹದಿಂದ ಇನ್ನಷ್ಟು ಉಮೇದಿನಿಂದ ನಮ್ಮ ಪ್ರಾಂತೀಯಭಾಷೆಯಲ್ಲಿ ನಿಜಕ್ಕೂ ಮಹತ್ತರ ಸಾಧನೆಗೈದರೆ ಆಶ್ಚರ್ಯವೇನಿಲ್ಲ.  ಕನ್ನಡವನ್ನೇ ತೆಗೆದುಕೊಳ್ಳಿ. ಒಬ್ಬ ಮುಸ್ಲಿಂ ಯುವಕ ಕನ್ನಡ ಪತ್ರಕರ್ತನೋ ಲೇಖಕನೋ ಆಗಿ  ಒಂದಿಷ್ಟು ಸಾಧನೆ ಮಾಡುತ್ತಿದ್ದಂತೇಯೇ ಅವನನ್ನು ನಮ್ಮ ಸಾಹಿತ್ಯ ಲೋಕ ಥಟ್ಟನೆ ಗುರುತಿಸಿ ಪ್ರೋತ್ಸಾಹಿಸುತ್ತದೆ.  ಹಾಗೆ ಅಲ್ಪ ಸಂಖ್ಯಾತ ಬಣದಿಂದ ಬಂದ ಲೇಖಕನೊಬ್ಬನನ್ನು ಗುರುತಿಸಿ ಪ್ರೋತ್ಸಾಹಿಸುವುದರಿಂದ  ಆ ಪತ್ರಿಕೆಗೋ ಆ ಸಂಸ್ಥೆಗೂ  ಹೆಮ್ಮೆಯ ವಿಷಯವೇ ಆಗಿಬಿಡುತ್ತದೆ. ಅದೇ ಒಬ್ಬ ಹಿಂದೂ ಯುವ ಲೇಖಕನನ್ನು ಅಷ್ಟೇ ಬೇಗನೆ ಗುರುತಿಸುವುದು ಅಪರೂಪವೇ...

ಹೀಗೆ ಹೇಳುತ್ತಿರುವ ನಾನೂ ಕೋಮುವಾದಿ ಎಂದು ನೀವು ಖಂಡಿತ ಭಾವಿಸಬಾರದು. ನನಗೂ ಮುಸ್ಲಿಂ ಭಾಂಧವರಲ್ಲಿ ಹಾಗೆ ನಿಜಕ್ಕೂ ಸಾಧನೆ ಮಾಡಿದವರ ಬಗ್ಗೆ ಗೌರವವಿದೆ. ನಮ್ಮ ಮೆಚ್ಚಿನ ಕವಿ ನಿಸಾರ್ ಅಹಮದ್ ಅವರನ್ನು ಯಾರೇ ಆಗಲಿ ಗೌರವಿಸದಿರಲಾದೀತೇ...  ಇಲ್ಲಿ ನನ್ನ ಪ್ರಶ್ನೆ ಏನೆಂದರೆ, ಒಬ್ಬ ಯುವ ಮುಸ್ಲಿಂ ಲೇಖಕನನ್ನೋ ಕಲಾವಿದನನ್ನೋ ಶೀಘ್ರವೇ ಗುರುತಿಸಿ ಪ್ರೋತ್ಸಾಹಿಸುವಷ್ಟು ಒಬ್ಬ ಹಿಂದೂ ಲೇಖಕನನ್ನ ಕಲಾವಿದನನ್ನ ಯಾಕೆ ಗುರುತಿಸುವುದಿಲ್ಲ ಎಂಬುದಷ್ಟೇ.... ಇದೊಂದು ರೀತಿ ವಿಕಲಚೇತನ ಮಾಡಿದ ಸಾಧನೆ ದೊಡ್ಡದು ಎಂಬಂತೆಯೋ ಅಥವಾ ನಮ್ಮ ಭಾಷೆ ಆತನ ಮಾತೃಭಾಷೆಯಲ್ಲವೆಂಬ ಮಾನದಂಡವೋ....ಇರಲಿ ಆತ ಮಾಡಿದ ಸಾಧನೆ ದೊಡ್ಡದೇ ಆಗಿರಬಹುದು  ಆತನನ್ನು ಶೀಘ್ರವೇ ಗುರುತಿಸಿ ಪ್ರೋತ್ಸಾಹ ನೀಡಿದಂತೆಯೇ  ಅದೇ ಒಬ್ಬ ಹಿಂದೂ ಮಾಡಿರಬಹುದಾದ ಕೆಲವೊಮ್ಮೆ ಅದಕ್ಕೂ ಹೆಚ್ಚಿನ ಮಹತ್ತದ ಸಾಧನೆಯನ್ನೇಕೆ ನಮ್ಮ ಸಾಹಿತ್ಯ ಕಲಾ ಲೋಕದ ದಿಗ್ಗಜರಿಗೆ ಅಷ್ಟೇ ಶೀಘ್ರಗತಿಯಲ್ಲಿ  ಗುರುತಿಸಿ ಪ್ರೋತ್ಸಾಹಿಸಲು ಕಾಣಸಿಗುವುದಿಲ್ಲ...

No comments: