Monday, July 21, 2014

ಇಂದ್ರಿಯ ಕಲ್ಯಾಣದಲ್ಲಿ...


ಭೂತಾನ್ ರಾಜಧಾನಿ ಥಿಂಪು ನಗರದಲ್ಲೆಲ್ಲೂ ಪುರುಷಲಿಂಗ ದರ್ಶನ ಅನಿವಾರ್ಯ . ಅವರು ಅದನ್ನು ಸುಖಜೀವನಕ್ಕೆ ಶಭಸಂಕೇತವೆಂದು ಭಾವಿಸುತ್ತಾರೆ. ಅಂದರೆ ಇಂದ್ರಿಯ ಕಲ್ಯಾಣದಲಿ ತಮ್ಮ ಜೀವಿತ ಕಲ್ಯಾಣವನ್ನು ಕಾಣುತ್ತಾರೆ. 
ಅವರು ಪರುಷೇಂದ್ರಿಯಕ್ಕಷ್ಟೇ ಪ್ರಾಮುಖ್ಯತೆ ಇತ್ತಿದ್ದಾರೆ. 
ನಾವು ಪ್ರಕೃತಿ ಪರುಷ ಎರಡಕ್ಕೂ ಪ್ರಾಧಾನ್ಯತೆ ಇತ್ತಿದ್ದೇವೆ. ನಮ್ಮಲ್ಲಿ ಶಿವಲಿಂಗವು ಮದನಾಂತಕ ಶಿವನಸ್ವರೂಪವಾಗಿ ನಿರಾಕಾರವಾಗಿದೆಯಲ್ಲದೇ 'ಭಗ'ಭೂಮಿ ದ ಪ್ರತೀಕವಾಗಿ 'ಪಾಣಿಪೀಠ' ಮತ್ತು ಲಿಂಗದ  ಪ್ರತೀಕವಾಗಿ ಲಿಂಗ ಇವೆರಡೂ ಸೇರಿ ಶಿವಲಿಂಗವು ರೂಪುಗೂಂಡಿತು ಎನ್ನುತ್ತಾರೆ.

* ಭೂಮಿ ಎಂದರೆ ಸೃಜನ ಮತ್ತು ಶಿವನೆಂದರೆ ಪಾವಿತ್ರ್ಯ, ಪಾಣಿಪೀಠದಲ್ಲಿ ಸೃಜನ ಮತ್ತು ಪಾವಿತ್ರ್ಯವು ಒಟ್ಟಿಗಿದ್ದೂ ವಿಶ್ವದ ಉತ್ಪತ್ತಿಯು ರೇತಸ್ಸಿನಿಂದ (ವೀಯರ್ಯದಿಂದ) ಆಗದೇ ಶಿವಸಂಕಲ್ಪದಿಂದಾಯಿತು ಎಂದೂ ಹೇಳುತ್ತಾರೆ . 
ಭೂಮಿಯೇ ಒಡಲು,ಲಯಕ್ಕೆ ಕಾರಣನಾದ ಶಿವನು ಸೃಷ್ಟಿ ಕರ್ತ ವಿಷ್ಣುವಿನೊಡನಿದ್ದಾನೆ. ಯಾಕೆ ಂದರೆ ಲಯದ ಬೆನ್ನಿಗೇ  ಸೃಷ್ಟಿಯಿದೆ. ಶಿವ ಶಕ್ತಿಯ ಸಂಕೇತವೂ ಮತ್ತು ಲಯಕ್ಕೆ ವಿವಶನೂ ಹೌದು. ಅಂತೆಯೇ ಮನುಷ್ಯರಲ್ಲಿ ಶಕ್ತಿ ಯೂ ಇದೆ ಅದು ಲೋಪವೂ ಆಗುವುದಿದೆ. ಅಂದರೆ ಇಂದ್ರಿಯ ಕಲ್ಯಾಣವೂ ಅವನಿಂದಲೇ ವಿನಾಶವೂ ಅವನಿಂದಲೇ.

* ನನ್ನ ನೆನಪಿಗೆಬರುತ್ತಿದೆ, ನನ್ನ ಪೌರಾಣಿಕ ಕೃತಿ -    
ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ'(ಶ್ರೀನಿವಾಸ ಕಲ್ಯಾಣ)ದ ಒಂದು ನುಡಿ:
   ಸತ್ವಗುಣದ ಹಿರಿಮೆಗೆ ರಜೋಗುಣದ ಹಿಡಿತಕೆ 
   ತಮೋಗಣದ  ಅಳಿವಿಗೆ ವೈವಾಹಿಕ ಜೀವನಕೆ 
   ಆದರ್ಶದ ಉಳಿವಿಗೆ ಸಾರುತಿಹನು ಸಂದೇಶ 
   ಇಂದ್ರಿಯ ಕಲ್ಯಾಣದಲಿ ಲೋಕಕಲ್ಯಾಣಕೆ 
   
ಅಂದರೆ ವಿಶ್ವಜೀವನದಲ್ಲಿ ವಿವಾಹ ಜೀವನದ ಪಾವಿತ್ರ್ಯತೆಯೇ ಹೆಚ್ಚುಹೆಚ್ಚು ಮಾನ್ಯತೆ ಪಡೆದಿದೆ. 
ಪಡೆಯತ್ತಿರುವುದನ್ನು ಕಾಣುತ್ತಿದ್ದೇವೆ. ಅಂದಹಾಗೆ ಇಂದ್ರಿಯಕಲ್ಯಾಣದೊಂದಿಗೆ ಸಭ್ಯ ಜೀವನ ಸುಖೀಸಂಸಾರ ವಿರುವುದೇ ವಿವಾಹಜೀವನಾದರ್ಶದಲ್ಲಿ.
   
  

   

No comments: