ಕೆಲವರಂತೂ ದುಡ್ಡುಕೊಟ್ಟು ಜ್ಯೋತಿಷ್ಯ ಕೇಳಿ ತಲೆಕೆಡಿಸಿಕೊಳ್ಳುವುದಕ್ಕಿಂತ ದೇವರಿಗೆ ಮೊರೆ ಹೋಗುವುದೇ ಲೇಸೆಂದು, ಗುಡಿಗಳಲ್ಲಿ ಕಲ್ಲುದೇವರ ಎದುರಿಗೇ ಕುಳಿತು ತಮ್ಮ ಪ್ರಶ್ನೆಗಳನ್ನು ಕೇಳುತ್ತಾರೆ. ಅವರ ಆ ನಂಬಿಕೆ ಪ್ರಶ್ನಾತೀತವೇ ಆಗಿಬಿಡುತ್ತದೆ. ಕೆಲ ಸಂದರ್ಭಗಳಲ್ಲಿ ದೇವರನ್ನೇ ಅವಲಂಬಿಸಿದ ಮೌಢ್ಯವೇ ಆಗಿರುತ್ತದೆ.
ಇದು ವ್ಯವಹಾರೀಕ ಪ್ರಪಂಚ. ಹಿಂದೆಂದಿಗಿಂತಲೂ ಈಗ ದುಡ್ಡಿನಲ್ಲೇ ಎಲ್ಲವನ್ನೂ ತೂಗುವ ಜನರೇ ಇದ್ದಾರೆ. ಬಹುತೇಕ ಜ್ಯೋತಿಷಿಗಳು ಜ್ಯೋತಿಷ್ಯವನ್ನು ದುಡ್ಡುಮಾಡುವ ದಂಧೆಯನ್ನಾಗಿಸಿಕೊಂಡಿದ್ದಾರೆ. ಅರ್ಧಗಂಟೆಗೆ ಸಾವಿರಗಟ್ಟಲೆ ಫೀಸು ಕೇಳಿ, ಕೇವಲ ಮೂರು ಪ್ರಶ್ನೆಗಳಿಗೆ ಮಾತ್ರ ಅವಕಾಶಕೊಡುವ ಖ್ಯಾತ ಜ್ಯೋಷ್ಯ ಶಾಸ್ತ್ರಯ್ಞರಿದ್ದಾರೆ!
ಇತ್ತೀಚಿನ ದಿನಗಳಲ್ಲಿ ನಿವೃತ್ತ ನೌಕರರೂ ನಾಲ್ಕು ಪುಸ್ತಕಗಳನ್ನು ಓದಿಕೊಂಡು, ಲ್ಯಾಪ್ ಟಾಪಗ ಗೆ ಮಾರುಕಟ್ಟೆಯಲ್ಲಿ ಲಭ್ಯವಿರುವ ಅಸ್ಟ್ರಾಲಜಿ ಸಾಫ್ಟ್ ವೇರ್ ಹಾಕಿಸಿಕೊಂಡು, ಹೊರಗೆ ತೂಗು ಚೀಲ ಹಾಕಿಕೊಂಡು ಓಡಾಡುತ್ತ ಜ್ಯೋತಿಷ್ಯ ಹೇಳುವ ಉದ್ಯೋಗ ಮಾಡುತ್ತಾರೆ. ಯಾಕೆಂದರೆ, ಇದಕ್ಕೆ ಯಾವ ಲೈಸೆನ್ಸ್ ಬೇಕಿಲ್ಲ. ಅವರು ನುಡಿದದ್ದೇ ಹಾಗೂ ಹೀಗು ಸರಿಯಾಗಿಬಿಟ್ಟರೆ ಸಾಕು, ಮುಗ್ಧಜನರ ದಂಡೇ ಅವರ ಮನೆ ಬಾಗಿಲಿಗೆ ಬರುತ್ತದೆ.
ಜ್ಯೋತಿಷ್ಯ ಪೂರ್ಣ ಸುಳ್ಳಲ್ಲ; ಪೂರ್ಣ ನಿಜವೂ ಅಲ್ಲ ಎಂಬುದು ಸಾರ್ವಕಾಲಿಕ ಸತ್ಯವಾಗಿದೆ. ಯಾಕೆಂದರೆ, ಭಗವಂತನೇ ಬಂದು ಹೇಳಿದಂತೆ ನಿಜಕ್ಕೂ 100% ಜ್ಯೋತಿಷ್ಯ ಹೇಳುವ ಜ್ಯೋತಿಷಿ ಇನ್ನೂ ಹುಟ್ಟಿರಲಿಕ್ಕಿಲ್ಲ. ಇಲ್ಲವಾದರೆ, ಜ್ಯೋತಿಷಿಗಳಿಗೆ ದೇವಸ್ಥಾನ ಕಟ್ಟಿಸಿಬಿಡುತ್ತಿದ್ದರು; ನಂಬಿಕೊಂಡ ನಮ್ಜ ಜನರು.
- ಜ್ಯೋಷ್ಯ ಕೇಳಿದರೆ, ನಂಬಿಯೂ ನಂಬದಂತಿರಬೇಕು. ಯಾಕೆ ಗೊತ್ತೇ...? ಯಾವ ಒಬ್ಬ ಜ್ಯೋತಿಷಿಯೂ ಕೇಳಿದ ಪ್ರಶ್ನೆಗೆ ತನಗೆ ತೋಚಿದುದನ್ನೆಲ್ಲ ಹೇಳಿ, ಕಡೆಗೆ ದೇವರ ಮೊರೆ ಹೋಗಿ ಎಂದು ಹೇಳದೇ ಇರಲಾರನಲ್ಲ....
- ತಂದೆ ತಾಯಿಗಳು ಜಾತಕಗಳನ್ನು ಹೊಂದಾಣಿಕೆ ಮಾಡಿಕೊಂಡು ಗಂಡು/ಹೆಣ್ಣನ್ನು ನೋಡಲು ಹೋದರೆನ್ನಿ, ಆಗ ಅವರು ಪರಸ್ಪರ ಒಪ್ಪಿಕೊಳ್ಳದಿದ್ದರೇನು ಮಾಡುತ್ತಾರೆ ಹೇಳಿ..? ಜಾತಕಗಳು ಕೂಡಿ ಬಂದಿವೆಯೆಂದರೆ ನಾನು ಮದುವೆಗೆ ಒಪ್ಪಿಕೊಳ್ಳಬೇಕೇನೂ...? ಎಂದೇ ಅಪ್ಪ-ಅಮ್ಮಂಗೆ ಸವಾಲೆಸೆಯುತ್ತಾರೆ. ಅಲ್ಲದೇ, ನೋಡದೆಯೇ ಒಪ್ಪಿಕೊಂಡುಬಿಡುವ ಸಂದರ್ಭಗಳೆಷ್ಟೋ ಇವೆಯಲ್ಲ!
- ಜ್ಯೋತಿಷ್ಯ-ಜಾತಕಗಳನ್ನು ಪರಿಶೀಲಿಸದೇನೆ ಮದುವೆಯಾದ ದಂಪತಿಗಳು ೩೦-೪೦ ವರ್ಷಗಳೇ ದಾಂಪತ್ಯ ಜೀವನ ನಡೆಸಿದವರಿದ್ದಾರೆ.
- ಜ್ಯೋತಿಷ್ಯ ಕೇಳಿಯೂ ವಿಫಲವಾದ ಮದುವೆಗಳೂ ಎಷ್ಟೋ ಇವೆಯಲ್ಲವೇ..?
- ಇಂದಿನ ದಿನಗಳಲ್ಲಿ ಲೌವ್ ಮ್ಯಾರೇಜ್ ಆಗುವ ಜೋಡಿಗಳು ಜ್ಯೋತಿಷ್ಯ ನಂಬುವುದೇ ಇಲ್ಲವಲ್ಲ. ಅವರೂ ಯಶಸ್ವಿಯಾಗಿ ಸಂಸಾರ ಸಾಗಿಸಿ ಸುಖ ಕಂಡವರಿದ್ದಾರೆ.
- ಜ್ಯೋತಿಷ್ಯದ ಮಾತಂತಿರಲಿ,ತಮ್ಮ ವಯಸ್ಸಿಗೆ ಬಂದ ಮಕ್ಕಳಲ್ಲಿ ಮಗನೋ ಮಗಳೋ, ಸಧ್ಯ ಮದುವೆಯಾದರೆ ಸಾಕೆಂಬ ಕಾಲವಿದಾಗಿದೆಯಲ್ಲವೇ...?
- ನೋಡಿ, ವೈದ್ಯರೂ ಕೂಡ ಆಪರೇಷನ್ ಸಕ್ಸಸ್ ಆಗಿದ್ದರೂ, ಪೇಷಂಟ್ ಗೆ ಪ್ರಜ್ಞೆ ಮರಳಿ ಬರುವತನಕ..
- ಅವರ ಕೈಯಲ್ಲಿಲ್ಲವಲ್ಲ! ಆದ್ದರಿಂದ ಅವರೂ ದೇವರ ಕಡೆಗೇ ಬೆರಳು ತೋರಿಸುತ್ತಾರೆ.
- ಕ.ಪ್ರ. ಪತ್ರಿಕೆಯ ಆಣಿ ಮುತ್ತು ಓದಿ ನೋಡಿ. ವಿಶ್ವದ ಮೊದಲ ಹದಯ ಕಸಿ ಮಾಡಿ ಖ್ಯಾತ ವೈದ್ಯರಾದ ಡಾ|| ಕ್ರಿಚ್ಚಿಯನ್ ಬರ್ನಾಡ್ ಏನು ಹಳುತ್ತಾರೆ ಎಂಬುದರಿಂದಲೇ ಸ್ಪಷ್ಟವಾಗುತ್ತದೆ.
"ತೇನವಿನಾ ತೃಣಮಪಿ ನ ಚಲತಿ ತೇನವಿನಾ
ಮಮತೆಯ ಬಿಡು ಹೇ ಮೂಢ ಮನಾ"
No comments:
Post a Comment