ಹಳದಮ್ಮ ದೇವಸ್ಥಾನ, ಹಳೇನಗರ, ಭದ್ರಾವತಿ |
ಭದ್ರಾವತಿ ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ನೋಟ |
ನನ್ನ ಬಾಲ್ಯದ ಮಿತ್ರ ಈಗ ಪ್ರಧಾನ ಅರ್ಚಕರೂ ಆದ ಶ್ರೀ ರಂಗನಾಥ ಅವರೊಂದಿಗೆ |
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಹೊರನೋಟ |
ದೇವಾಲಯ ತುಂಬ ಪ್ರಸಿದ್ದಿ ಪಡೆದಿದೆ.ಹಳೇ ಬೀಡು ಬೇಲೂರು ಮಾದರಿಯ ಶಿಲ್ಪಕಲೆಯನ್ನು ಹೊಂದಿರುವ ಈ ದೇವಸ್ಥಾನದ ಸುತ್ತ ಮುತ್ತ ಹಾಗೂ ಪ್ರಾಂಗಣದಲ್ಲಿ ನನ್ನ ಬಾಲ್ಯದ ಮಿತ್ರರೊಂದಿಗೆ ಆಡಿ ಬೆಳೆದ ಆ ದಿನಗಳ ಸವಿ ನೆನಪು ಮರೆಯಲುಂಟೇ...
ಇಂದಿಗೆ ದೇಚವಾಲಯದ ಅರ್ಚಕರಾದ
ಶ್ರಿ ರಂಗನಾಥ ಅವರು ನನ್ನ ಬಾಲ್ಯದ ಸ್ನೇಹಿತ,
ಅವರೊಂದಿಗೆ ನಾನು ಮತ್ತು ನನ್ನ ಶ್ರೀಮತಿ.
ನರಸಿಂಹಸ್ವಾಮಿ ದೇವಾಲಯದ ಈ ಹೊರ ಆವರಣದಲ್ಲಿ ಆರ್.ಎಸ್.ಎಸ್.ಶಾಖೆ ನಡೆಯುತ್ತಿತ್ತು. ನಾನು ಪ್ರತಿನಿತ್ಯ ಸಂಜೆ ಇಲ್ಲಿಗೆ ಹಾಜರಾಗುತ್ತಿದ್ದೆ. ಬಾಲ್ಯಸ್ನೇಹಿತರೆಷ್ಟೋ..ಅವರೊಡನೆ ಕಬ್ಬಡಿ, ಕೋಕೋ ಆಟಗಳು ಮತ್ತು ದೇಶ ಭಕ್ತಿ ಗೀತೆಗಳು, ನಮ್ಮ ನಾಡು ನುಡಿಯ ಬಗ್ಗೆ ಮಾತು ಕತೆ, ನಮ್ಮ ಸನಾತನ ಹಿಂದೂ ಧರ್ಮ ಸಂಸ್ಕೃತಿಯ ಬಗ್ಗೆ ಚಿಕ್ಕಂದಿನಿಂದಲೆ ನಮಗೆ ದೊರೆಯುತ್ತಿದ್ದ ತಿಳುವಳಿಕೆ ಹಾಗೂ ನಮ್ಮ ಸಂಸ್ಕೃತಿ ಪರಂಪರೆಯ ಅಡಿಪಾಯ ಶ್ಲಾಘನೀಯವೇ. ಅಲ್ಲಿ ಯಾವೊಂದು ರಾಜಕೀಯದ ಚರ್ಚೆಗಳಿರುತ್ತಿರಲಿಲ್ಲ. ಅದು ಅಲ್ಲಿ ಅನಪೇಕ್ಷಿತವಾಗಿತ್ತು. ನಾನು ಎಸ್ಸೆಸ್ಸೆಲ್ ಸಿ ಮುಗಿಸಿದ ಬಳಿಕ ನಮ್ಮ ಕುಟುಂಬ ಭದ್ರಾವತಿ ತೊರೆದು ಶಿವಮೊಗ್ಗಾಕ್ಕೆ ಬರಬೇಕಾಯಿತು. ಆನಂತರ, ಆರ್ ಎಸ್ ಎಸ್ ನಿಂದ ದೂರವೇ ಉಳಿದುಬಿಟ್ಟೆನಾದರೂ, ಒಟ್ಟಿನಲ್ಲಿ ಆರ್ ಎಸ್ ಎಸ್ ನಮ್ಮ ಹರೆಯದ ದಿನಗಳಲ್ಲೇ ನಮಗೆ ನೀಡಿದ ಸಾಂಸ್ಕೃತಿಕ ವ್ಯಕ್ತಿತ್ವ ವಿಕಾಸವನ್ನು ಎಂದಿಗೂ ಮರೆಯುವಂತಿಲ್ಲ.
ಪ್ರೌಢಶಾಲೆಯಲ್ಲಿ ನನ್ನ ಮೇಷ್ಟ್ರೂ ಮಂಜಪ್ಪನವರು. ಇದೀಗ 80 ರ ಹರೆಯದ ಜ್ಞಾನವೃದ್ಧರು. ಅಂದಿನ ಕಾಲಕ್ಕೆ ಅವರು ಒಬ್ಬ ಆರ್.ಎಸ್.ಎಸ್.ನ ಕಟ್ಟಾ ಸಯಂಸೇವಕರು.
ನಡೆಯುತ್ತಿತ್ತು. ನನಗಂತು ಬಾಲ್ಯದ ದಿನಗಳಿಗಷ್ಟೇ ಸಂಘದ ಒಡನಾಟ ಮುಗಿದಿತ್ತು.
1 comment:
'ಸವಿ ಸವಿ ನೆನಪು, ಸಾವಿರ ನೆನಪು'
Post a Comment