Monday, June 16, 2014

ಲೋಕವೆಂಬುದು ಜನರ ದೃಷ್ಟಿಯಲ್ಲಿ...

ಲೋಕ  ಅನೇಕರ ದೃಷ್ಟಿಯಲ್ಲಿ ಒಂದು ವ್ಯವಹಾರಿಕವ್ಯವಸ್ಥೆ. ಕೆಲವರಪಾಲಿಗೆ ಬರಿ ಅದೃಷ್ಟದ ಅವಸ್ಥೆ. ಹಲವರಿಗೆ ಒಂದು ಪ್ರಾಯೋಗಿಕ ಭೂಮಿಕೆ. ಮತ್ತೆ ಕೆಲವರಿಗೆ ಹಿರಿಯರ ಅನುಭವದಲ್ಲಿ  ಮತ್ತು ದೈವಿಕತೆಯಲ್ಲಿ ಅಮೃತತ್ವವಿದೆ ಎಂಬ ನಂಬಿಕೆ.

ವ್ಯವಹಾರಿಕವೆಂದುಕೊಂಡರೆ ನಿರ್ಭಾವುಕರು, ಹಣವೇ ಎಲ್ಲ ಎಂದು ತಿಳಿದವರು.
ಬರೀ ಅದೃಷ್ಟವೆಂದು ಕುಳಿತವರು ದುರ್ಬಲರು.
ಪ್ರಾಯೋಗಿಕ ಭೂಮಿಕೆ  ಎಂದು ತಿಳಿದವರಿಗೆ ನಿರಂತರ ಹೋರಾಟದ ಛಲ. ಸಿದ್ಧಿಗಿಂತಲೂ ಸಾಧಕರಾಗಿರುವುದರಲ್ಲೇ ತೃಪ್ತಿ. ಯಾಕೆಂದರೆ, ಪ್ರಯತ್ನ ನಮ್ಮದು ಸಂಕಲ್ಪ ಸಿದ್ಧಿ ಪರಮಾತ್ಮನ ಇಚ್ಛೆಯಷ್ಟೇ.. ಇಂಥವರು ದೇವರ ಬಗ್ಗೆ ಹೀಗಿರುತ್ತಾರೆ-
ದೇವರನ್ನು ನಂಬಿದವ ಸುಖಿ. ದೇವರನ್ನೇ ಅವಲಂಬಿಸಿದವ ಅಸುಖಿ. ದೇವರಿಲ್ಲ ಎನ್ನುವವನು ಸುಖದ ಹುಡುಕಾಟದಲ್ಲೇ ಇರುತ್ತಾನೆ.
ಅಂತೆಯೇ, ದೈವಿಕತೆ ಬಲ್ಲ ಇವರಿಗೆ ಸುಖವೆಂಬುದು ಕಾಲಬುಡದಲ್ಲೇ ಇದೆ ಎಂಬ ಅರಿವು ಇರುತ್ತದೆ. ಅಂದಹಾಗೆ, ಮಾತು ಬಾಯಿಂದ ಜಾರಿಹೋಗುವ ಮುನ್ನ ಹತ್ತು ಸಲ ಯೋಚಿಸಬೇಕು. ಬರಹ ಕೈಯಿಂದ ಇತರರಿಗೆ ತಲುಪುವ ಮನ್ನ ಹತ್ತು ಹಲವು ದೃಷ್ಟಿ ಕೋನದಲ್ಲಿ ನೋಡಿರಬೇಕು. ನಿಮ್ಮ ಹಣ, ವಸ್ತು(ದೇಹ ಕೂಡ), ವನ್ನು ಬಳಸಿಕೊಳ್ಳುವ ಮುನ್ನ ಮುಂದಾಲೋಚನೆ ಇರಬೇಕು, ಸಾಲ ಪಡೆಯುವ ಮುನ್ನ ಕೊಡುವ ಮುನ್ನ ಎಚ್ಚರದಿಂದಿರಬೇಕು.
-ಶಿವ ಚೇತನ
”ಶಿವ ಚೇತನ ’’ಎಂದರೆ ಯಾರು? ಎಂದು ಕೇಳದಿರಿ. ಅದು ನನ್ನ ಜೀವಾತ್ಮನ ಧ್ವನಿ!  ಶಿರೋನಾಮೆ.

No comments: